

ಗದಗ: ಹುಬ್ಬಳ್ಳಿಯ ಶ್ರೀ ಸಿದ್ಧಾರೂಢ ಮಠದ ಆಜೀವ ಸದಸ್ಯರು, ಆಶ್ರಯದಾತರು, ಪೋಷಕರ ಮನೆ(ಮೇಲ್ಮನೆ) ಅಧ್ಯಕ್ಷನ್ನಾಗಿ ಗದುಗಿನ ಮಾಜಿ ಶಾಸಕ ಡಿ.ಆರ್. ಪಾಟೀಲ, ಉಪಾಧ್ಯಕ್ಷರನ್ನಾಗಿ ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ತುಕ್ಕಾನಟ್ಟಿಯ ಬಿ.ಆರ್ ಬಾಗೇವಾಡಿ ಅವರನ್ನು ಆಯ್ಕೆ ಮಾಡಲಾಗಿದೆ.
ಧಾರವಾಡದ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಶ್ರೀ ಸಿದ್ದಾರೂಢ ಮಠದ ಟ್ರಸ್ಟ್ ಕಮೀಟಿ ಮುಖ್ಯ ಆಡಳಿತಗಾರರಾಗಿರುವ ಕೆ.ಜಿ ಶಾಂತಿ ಅವರು ಶ್ರೀಮಠದ ಟ್ರಸ್ಟಿನ ಗೊತ್ತುವಳಿ ಮೇರೆಗೆ ಟ್ರಸ್ಟಿನ ಅವಧಿಯವರೆಗೆ ನೇಂಕ ಮಾಡಿ ಆದೇಶ ಹೊರಡಿಸಿದ್ದಾರೆ.
ಗದಗ ತಾಲೂಕಿನ ಹುಲಕೋಟಿ ಗ್ರಾಮದ ಡಿ.ಆರ್. ಪಾಟೀಲ ಅವರು ಬಿಇ ಮೆಕ್ಯಾನಿಕಲ್ ಪದವೀಧರರಾಗಿದ್ದು, ಗದಗ ಮತಕ್ಷೇತ್ರದ ಶಾಸಕರಾಗಿ ೪ ಅವಧಿಗೆ ಸೇವೆ ಸಲ್ಲಿಸಿದ್ದಾರೆ. ಅಲ್ಲದೇ, ಸಂತ ರಾಜಕಾರಣಿ ಎಂದೇ ಗುರುತಿಸಿಕೊಂಡಿದ್ದಾರೆ. ರಾಜ್ಯ ಮತ್ತು ರಾಷ್ಟçಮಟ್ಟದ ಸಹಕಾರ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿರುವ ಅವರು, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ರಾಜ್, ಸಹಕಾರ, ಎಪಿಎಂಸಿ, ಶಿಕ್ಷಣ ಹಾಗೂ ಧಾರ್ಮಿಕ ಕ್ಷೇತ್ರಗಳಲ್ಲಿ ತಮ್ಮನ್ನು ತಾವು ಗುರುತಿಸಿಕೊಂಡಿದ್ದಾರೆ.
- ನಕಲಿ ಖಾತೆ ಸೃಷ್ಟಿಸಿ ಇಡೀ ಗ್ರಾಮವನ್ನೇ ಮಾರಾಟಕ್ಕಿಟ್ಟ ಪಂಚಾಯಿತಿ ಬಿಲ್ ಕಲೆಕ್ಟರ್…ಪತ್ನಿ ಹೆಸರಿಗೆ ದಾಖಲೆ ಸೃಷ್ಟಿಸಿ ಭೂಪ…!!!
- ಆದಾಯ ಮೀರಿದ ಆಸ್ತಿ ಹೊಂದಿದ ಕೇಸ್… ಡಿಸಿಎಂ ಡಿಕೆಶಿ ಸಿಬಿಐ ಕೇಸ್ ವಾಪಸ್ ಗೆ ನಿರ್ಧರಿಸಿದ ಸರ್ಕಾರದ ಕ್ರಮ ವಿರೋಧಿಸಿ… ನ್ಯಾಯಾಲಯದ ಮೆಟ್ಟಿಲೇರಿದ ಶಾಸಕ ಬಸನಗೌಡ ಪಾಟೀಲ ಯತ್ನಾಳ
- ಮುಂಗಾರುಮಳೆ ಬೆಡಗಿಗೆ ಕೂಡಿ ಬಂದ ಕಂಕಣ… ಪೂಜಾ ಗಾಂಧಿ ಮದುವೆ ಆಗುವ ಹುಡುಗ ಯಾರು ಗೊತ್ತೆ….!
- ಗದಗ ನಗರದಲ್ಲಿನ 22 ಗುಂಟೆ ನಿವೇಶನ ಹಕೀಕತ್… ರಾಕೇಶ ಸಿದ್ದರಾಮಯ್ಯ ಟ್ರಸ್ಟ್ ಗೆ ಕೊಡಿ ಎಂದು ಸಿಎಂ ಆದೇಶ, ಚನ್ನಮ್ಮ ಸಮುದಾಯ ಭವನಕ್ಕೆ ನೀಡಲು ಸಚಿವ ಎಚ್ ಕೆ ಪಾಟೀಲ ಆಸಕ್ತಿ…????
- ಗದಗ-ಬೆಟಗೇರಿ ಅವಳಿ ನಗರದಲ್ಲಿ (ಥರ್ಡ್ ಐ) ಮೂರನೇ ಕಣ್ಣು ಕಟ್ಟೆಚ್ಚರ….ಸಂಚಾರಿ ನಿಯಮ ಉಲ್ಲಂಘಿಸಿದರೆ ಮನೆ ಬಾಗಿಲಿಗೆ ಬರುತ್ತೆ ದಂಡದ ನೋಟಿಸ್… ಎಸ್ಪಿ ಬಿ ಎಸ್ ನೇಮಗೌಡರ ಕಾರ್ಯಕ್ಕೆ ವ್ಯಾಪಕ ಶ್ಲಾಘನೆ…