ಗದಗ: ಹಾವೇರಿ ಲೋಕಸಭೆ ಕ್ಣೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರು ಕಣಕ್ಕಿಳಿಯಲಿದ್ದಾರೆ ಎಂಬ ಮಾತುಗಳಿಗೆ ರೆಕ್ಕಪುಕ್ಕ ಸಿಕ್ಕಿವೆ.
ಬಸವರಾಜ ಬೊಮ್ಮಾಯಿ ಅವರು ಪ್ರತಿಪಕ್ಷದ ನಾಯಕರಾಗುತ್ತಾರೆ ಇಲ್ಲವೇ ಪಕ್ಷದ ರಾಜ್ಯಾಧ್ಯಕ್ಷರಾಗುವ ಸಾಧ್ಯತೆಗಳಿವೆ. ಆದ್ದರಿಂದ ಹಾವೇರಿ ಲೋಕಸಭೆ ಕ್ಷೇತ್ರದಿಂದ ಸ್ಪರ್ಧಿಸುವ ಸಾಧ್ಯತೆ ಕಡಿಮೆ ಎಂದು ಇಲ್ಲಿವರೆಗೆ ಊಹಿಸಲಾಗಿತ್ತು. ಆದರೆ, ಈ ಎರಡೂ ಸ್ಥಾನಗಳು ಸದ್ಯ ಭರ್ತಿ ಅಗಿವೆ. ಬಿ ವೈ ವಿಜಯೇಂದ್ರ ರಾಜ್ಯಾಧ್ಯಕ್ಷ ಹಾಗೂ ಆರ್ ಅಶೋಕ ಪ್ರತಿ ಪಕ್ಷದ ನಾಯಕರಾಗಿ ನೇಮಕಗೊಂಡಿದ್ದಾರೆ. ಹೀಗಾಗಿ ಬಸವರಾಜ ಬೊಮ್ಮಾಯಿ ಅವರು ಹಾವೇರಿ ಲೋಕಸಭೆ ಕ್ಷೇತ್ರದಿಂದ ಸ್ಪರ್ಧಿಸಬಹುದು ಎಂಬ ಲೆಕ್ಕಾಚಾರ ಶುರುವಾಗಿದೆ.

ಹಾಲಿ ಸಂಸದ ಶಿವಕುಮಾರ ಉದಾಸಿ ಅವರು ಚುನಾವಣೆ ರಾಜಕಾರಣದ ಬಗ್ಗೆ ಉದಾಸೀನ ತೋರಿದ್ದರಿಂದ ಹೊಸಬರಿಗಾಗಿ ಬಿಜೆಪಿ ವರಿಷ್ಠರು ಹುಡುಕಾಟ ನಡೆಸಿದ್ದಾರೆ.
ಮಾಜಿ ಉಪಮುಖ್ಯಮಂತ್ರಿ ಕೆ ಎಸ್ ಈಶ್ವರಪ್ಪ ಸಹ ತಮ್ಮ ಪುತ್ರ ಕಾಂತೇಶ ಅವರಿಗೆ ಹಾವೇರಿ ಟಿಕೆಟ್ ನೀಡಬೇಕು ಎಂದು ಪಕ್ಷದ ವರಿಷ್ಠರ ಮೇಲೆ ಒತ್ತಡ ಹೇರುತ್ತಿದ್ದಾರೆ.
ಲೋಕಸಭೆ ಚುನಾವಣೆಗಾಗಿ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷದೊಳಗೆ ಹತ್ತಾರು ಲೆಕ್ಕಾಚಾರಗಳು ಶುರುವಾಗಿವೆ. ಗೆಲುವು ಸಾಧಿಸುವ ಅಭ್ಯರ್ಥಿಗಾಗಿ ಎರಡೂ ಪಕ್ಷಗಳು ಹುಡುಕಾಟ ನಡೆಸಿವೆ. ಗದಗ ನಗರದ ಡಾ ಶೇಖರ ಸಜ್ಜನರ ಕೂಡಾ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ.
- ನಕಲಿ ಖಾತೆ ಸೃಷ್ಟಿಸಿ ಇಡೀ ಗ್ರಾಮವನ್ನೇ ಮಾರಾಟಕ್ಕಿಟ್ಟ ಪಂಚಾಯಿತಿ ಬಿಲ್ ಕಲೆಕ್ಟರ್…ಪತ್ನಿ ಹೆಸರಿಗೆ ದಾಖಲೆ ಸೃಷ್ಟಿಸಿ ಭೂಪ…!!!
- ಆದಾಯ ಮೀರಿದ ಆಸ್ತಿ ಹೊಂದಿದ ಕೇಸ್… ಡಿಸಿಎಂ ಡಿಕೆಶಿ ಸಿಬಿಐ ಕೇಸ್ ವಾಪಸ್ ಗೆ ನಿರ್ಧರಿಸಿದ ಸರ್ಕಾರದ ಕ್ರಮ ವಿರೋಧಿಸಿ… ನ್ಯಾಯಾಲಯದ ಮೆಟ್ಟಿಲೇರಿದ ಶಾಸಕ ಬಸನಗೌಡ ಪಾಟೀಲ ಯತ್ನಾಳ
- ಮುಂಗಾರುಮಳೆ ಬೆಡಗಿಗೆ ಕೂಡಿ ಬಂದ ಕಂಕಣ… ಪೂಜಾ ಗಾಂಧಿ ಮದುವೆ ಆಗುವ ಹುಡುಗ ಯಾರು ಗೊತ್ತೆ….!
- ಗದಗ ನಗರದಲ್ಲಿನ 22 ಗುಂಟೆ ನಿವೇಶನ ಹಕೀಕತ್… ರಾಕೇಶ ಸಿದ್ದರಾಮಯ್ಯ ಟ್ರಸ್ಟ್ ಗೆ ಕೊಡಿ ಎಂದು ಸಿಎಂ ಆದೇಶ, ಚನ್ನಮ್ಮ ಸಮುದಾಯ ಭವನಕ್ಕೆ ನೀಡಲು ಸಚಿವ ಎಚ್ ಕೆ ಪಾಟೀಲ ಆಸಕ್ತಿ…????
- ಗದಗ-ಬೆಟಗೇರಿ ಅವಳಿ ನಗರದಲ್ಲಿ (ಥರ್ಡ್ ಐ) ಮೂರನೇ ಕಣ್ಣು ಕಟ್ಟೆಚ್ಚರ….ಸಂಚಾರಿ ನಿಯಮ ಉಲ್ಲಂಘಿಸಿದರೆ ಮನೆ ಬಾಗಿಲಿಗೆ ಬರುತ್ತೆ ದಂಡದ ನೋಟಿಸ್… ಎಸ್ಪಿ ಬಿ ಎಸ್ ನೇಮಗೌಡರ ಕಾರ್ಯಕ್ಕೆ ವ್ಯಾಪಕ ಶ್ಲಾಘನೆ…
- ಸಂವಿಧಾನ ರಕ್ಷಣೆ ನಮ್ಮೆಲ್ಲರ ಹೊಣೆ ಸಚಿವ ಡಾ.ಎಚ್ಕೆ.ಪಾಟೀಲ… ಭಾರತದ ಸಂವಿಧಾನ ಶ್ರೇಷ್ಠ ಸಂವಿಧಾನ…